"ಜನರು ಪ್ರತಿದಿನದ ಜೀವನದಲ್ಲಿಯೂ ಸರಕಾರದ ಯೋಗ್ಯತೆಯನ್ನು ಕಂಡುಕೊಳ್ಳುತ್ತಿರುತ್ತಾರೆ." - ಡಾ. ಡಿ.ವಿ.ಗುಂಡಪ್ಪ (ಕೃತಿ: ರಾಜ್ಯಶಾಸ್ತ್ರ) * "ಅನ್ಯಾಯಗಳ ವಿರುದ್ಧ ಕೆಚ್ಚೆದೆಯಿಂದ ನಿಲ್ಲು. ಎಂತಹ ಪರಿಸ್ಥಿತಿಗೂ ಸಿದ್ಧನಾಗಿರು." -ಡಾ.ಡಿ.ವಿ.ಗುಂಡಪ್ಪ, (ಮಂಕುತಿಮ್ಮನ ಕಗ್ಗ-258)

ಪ್ರತಿನಿತ್ಯ ಊಟಕ್ಕೆ ಕುಳಿತಾಗ ಅನ್ನ ತಿನ್ನುವ ಮೊದಲು ನಿನ್ನನ್ನು ನೀನು ಕೇಳಿಕೋ- "ಇದನ್ನು ಬೇಯಿಸಿದ ನೀರು ನಿನ್ನ ಪರಿಶ್ರಮದ ಬೆವರೋ? ಅಥವಾ ಇನ್ನೊಬ್ಬರ ಕಣ್ಣೀರೋ?"-ಡಾ.ಡಿ.ವಿ.ಗುಂಡಪ್ಪ, ಕೃತಿ: ಮಂಕುತಿಮ್ಮನ ಕಗ್ಗ

Tuesday, October 2, 2018

ಸರ್ಕಾರಿ ಜೂ.ಕಾಲೇಜು ಮೈದಾನ ಮತ್ತು ಪಕ್ಕದ ರಸ್ತೆ ಬದಿ ಸಾಲು ಮರ ರಕ್ಷಣೆ Govr. Jr. College Grounds





ಪ್ರಯತ್ನಕ್ಕೆ ದೊರೆತ ಫಲ..............
ತುಮಕೂರಿನ ಡಾ. ಎಸ್.ರಾಧಾಕೃಷ್ಣನ್‍‍ ರಸ್ತೆಯಲ್ಲಿರುವ ಸಾಲುಮರಗಳನ್ನು ಸಂರಕ್ಷಿಸಬೇಕೆಂದು ಕೋರಿ ರಾಜ್ಯ ಸರ್ಕಾರದ ವಿವಿಧ ಪ್ರಮುಖರಿಗೆ ಹಾಗೂ ಪ್ರಧಾನಮಂತ್ರಿಗಳ ಕಚೇರಿಗೆ ಮನವಿಪತ್ರವನ್ನು ಕಳುಹಿಸಿದ್ದೆ. ಆ ಎಲ್ಲ ಪ್ರಮುಖರಿಂದಲೂ ಸಕಾರಾತ್ಮಕವಾದ ಪ್ರತಿಕ್ರಿಯೆ ದೊರೆತಿತ್ತು. ಪತ್ರಗಳೂ ಬಂದಿದ್ದವು. ಅವೆಲ್ಲದರ ಪರಿಣಾಮವೋ ಎಂಬಂತೆ ಇದೀಗ ಸದರಿ ಮರಗಳನ್ನು ಕಡಿಯುವ ಬದಲಾಗಿ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದೊಂದು ಒಳ್ಳೆಯ ಬೆಳವಣಿಗೆ. ಆದರೆ ಈ ಮರಗಳನ್ನು ಪಕ್ಕದ ಜೂನಿಯರ್ ಕಾಲೇಜು ಮೈದಾನದ ಬದಲು ವಸಂತನರಸಾಪುರ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳವರಿಗೆ ಅವರ ವೆಚ್ಚದಲ್ಲೇ ಸ್ಥಳಾಂತರಿಸಬಹುದಿತ್ತು. ಅಥವಾ ಈಗ ತಿಪಟೂರು ಕಡೆಯಲ್ಲಿ ಹೆದ್ದಾರಿಯು ವಿಸ್ತಾರವಾಗುತ್ತಿರುವುದರಿಂದ ರಸ್ತೆ ಬದಿಗೆ ಸ್ಥಳಾಂತರಿಸಬಹುದಿತ್ತು ಎಂಬುದು ನನ್ನ ಅಭಿಪ್ರಾಯ........







ವಿಕೆ  ನ್ಯೂಸ್    http://vknews.in/364517/