"ಜನರು ಪ್ರತಿದಿನದ ಜೀವನದಲ್ಲಿಯೂ ಸರಕಾರದ ಯೋಗ್ಯತೆಯನ್ನು ಕಂಡುಕೊಳ್ಳುತ್ತಿರುತ್ತಾರೆ." - ಡಾ. ಡಿ.ವಿ.ಗುಂಡಪ್ಪ (ಕೃತಿ: ರಾಜ್ಯಶಾಸ್ತ್ರ) * "ಅನ್ಯಾಯಗಳ ವಿರುದ್ಧ ಕೆಚ್ಚೆದೆಯಿಂದ ನಿಲ್ಲು. ಎಂತಹ ಪರಿಸ್ಥಿತಿಗೂ ಸಿದ್ಧನಾಗಿರು." -ಡಾ.ಡಿ.ವಿ.ಗುಂಡಪ್ಪ, (ಮಂಕುತಿಮ್ಮನ ಕಗ್ಗ-258)

ಪ್ರತಿನಿತ್ಯ ಊಟಕ್ಕೆ ಕುಳಿತಾಗ ಅನ್ನ ತಿನ್ನುವ ಮೊದಲು ನಿನ್ನನ್ನು ನೀನು ಕೇಳಿಕೋ- "ಇದನ್ನು ಬೇಯಿಸಿದ ನೀರು ನಿನ್ನ ಪರಿಶ್ರಮದ ಬೆವರೋ? ಅಥವಾ ಇನ್ನೊಬ್ಬರ ಕಣ್ಣೀರೋ?"-ಡಾ.ಡಿ.ವಿ.ಗುಂಡಪ್ಪ, ಕೃತಿ: ಮಂಕುತಿಮ್ಮನ ಕಗ್ಗ

Monday, October 5, 2009

Saras View

ತುಮಕೂರು ನಗರದ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯು ಸಾರ್ವಜನಿಕ ಹಿತದೃಷ್ಟಿಯಿಂದ ವಿಶಿಷ್ಟ ರೀತಿಯಲ್ಲಿ ಕ್ರಿಯಾಶೀಲವಾಗಿದೆ. ಸಾರ್ವಜನಿಕ ಸಮಸ್ಯೆಗಳಿಗೆ ಅತ್ಯಂತ ರಚನಾತ್ಮಕವಾಗಿ, ವೈಧಾನಿಕವಾಗಿ, ಕ್ರಮಬದ್ಧವಾಗಿ ಧ್ವನಿಯಾಗುತ್ತಿದೆ. ವಿವಿಧ ಸಮಸ್ಯೆ ಹಾಗೂ ಸೌಲಭ್ಯಗಳ ಬಗ್ಗೆ ಮಾಧ್ಯಮಗಳ ಮೂಲಕ ಬೆಳಕು ಚೆಲ್ಲುವ ಮತ್ತು ಸರ್ಕಾರದ / ಆಡಳಿತ ವ್ಯವಸ್ಥೆಯ ಗಮನ ಸೆಳೆಯುವ ಕಾರ್ಯವನ್ನು ಸತತವಾಗಿ ನಡೆಸಿಕೊಂಡು ಬರುತ್ತಿದೆ. ಸಂಬಂಧಿಸಿದ ಇಲಾಖಾಧಿಕಾರಿಗಳು, ಜಿಲ್ಲಾಧಿಕಾರಿಗಳಿಂದ ಆರಂಭಿಸಿ, ಆಯಾ ಇಲಾಖೆಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳವರೆಗೆ ಮನವಿ ಪತ್ರಗಳನ್ನು ಸಲ್ಲಿಸಿ, ಕ್ರಮಕ್ಕೆ ಒತ್ತಾಯಿಸಲಾಗುತ್ತಿದೆ. ಆ ಬಗೆಗಿನ ನಮ್ಮ ಮನವಿ ಪತ್ರಗಳು ಮತ್ತು ಅದಕ್ಕೆ ದೊರೆತಿರುವ ಪ್ರತಿಕ್ರಿಯೆಗಳ ಮಾಹಿತಿ ಇಲ್ಲಿದೆ.


-ಆರ್.ವಿಶ್ವನಾಥನ್ , ಸರಸ್ ಮಾಧ್ಯಮ ಸಂಪರ್ಕ

No comments: